ಕಪ್ಪು ಕಾಂಚಾಣ
ಕಪ್ಪು ಕಾಂಚಾಣ ಕುಣಿಯುತ್ತಲಿದ್ಲು
ಬ್ಯಾಂಕೊಳಗೆ ಬರದೆ ನುಲಿಯುತ್ತಲಿದ್ಲು
ಎಲೆಕ್ಷನ್ ಹೊತ್ತಲ್ಲಿ ಸೂಟ್ಕೇಸಲಿ ಕುಳಿತು
ಸೀಟೀನ ಡೀಲನ್ನು ಕುದುರಿಸುತ್ತಿದ್ಲು
ಬಡತನದೆದುರು ನಡುವನ್ನು ಕುಲುಕಿಸಿ
ನೋಟದಲೇ ಓಟನ್ನು ಉದುರಿಸುತ್ತಿದ್ಲು
ಲಂಚಿಗೂ ಕೂಡ ಲಂಚಾನೇ ನುಂಗ್ತಿದ್ದ
ಸಾಹೇಬಗೂ ಇವಳೇ ಊಟ ಬಡಿಸಿದ್ಲು
ಸರ್ವೀಸು ಮುಗಿಸುವ ಹೊತ್ತಿಗಾಗಲೇ
ಕೋಟಿ ಕೋಟಿಗಳ ಸೈಟು ಕೊಡಿಸಿದ್ಲು
ದೇಗುಲದ ಹುಂಡಿಯ ಕಿಂಡಿಯ ಒಳಗೂ
ಇವಳದ್ದೆ ಕರಿಛಾಯೆ ಇಣುಕುತ್ತಲಿತ್ತು
ಧನ ಕನಕ ತೊರೆದ ಕಾವಿ ಸ್ವಾಮಿಯನು
ಕರಿಗೆಜ್ಜೆ ಸೌಂಡು ಕೆಣಕುತ್ತಲಿತ್ತು
ಮೋದಿ ಬಂದು ಇವಳ ಕರಿಸೀರೆ ಕಳಚಲು
‘ಇಟ್ಕಂಡೋರ’ ಫೇಸು ಮಂಕಾಗಿ ಹೋಯ್ತು
ಕಣ್ಣೆದಿರೆ ಸೀರೆ ಬದಲಾಗಿದ್ದನು ಕಂಡ
ಗಾಂಧಿ ತಾತನ ಮೂತಿ ಪಿಂಕಾಗಿ ಹೋಯ್ತು
ಯರ್ಯಾರ ಜೊತೆಗೆ ಎಲ್ಲೆಲ್ಲಿ ಇದ್ಲೋ
ಬಿಳಿಸೀರೆ ಉಟ್ಟು ಬ್ಯಾಂಕಲ್ಲಿ ಬಿದ್ಲೋ
(ಇದಕ್ಕೆ ಸ್ಪೂರ್ತಿಯಾದ, ಕುರುಡು ಕಾಂಚಣ ಪದ್ಯ ಬರೆದ ಬೇಂದ್ರೆಯವರ ಅಕೌಂಟಿಗೆ, ಕೋಟಿ ನಮನ)