ಚಂದಿರನ ತುಂಡು
ಸುದ್ದಿ ತಿಳಿಯಿತೇ ಇಂದು?
ಭೂಮಿಗೆ ಬಿದ್ದಿದೆಯಂತೆ
ಚಂದಿರನ ತುಂಡು.
ಕೋಟಿ ತಾರೆಗಳ ಸೇರಿ
ಹುಡುಕುತಿವೆ ಅದನು
ಭೂಮಿಗೆ ಬಂದು.
ನನಗನ್ನಿಸುತ್ತದೆ ಬಹುಶಃ
ಇಲ್ಲಿ ಬಂದಿವೆ ಅವು
ನಿನ್ನನು ಕಂಡು.
ಚಂದಿರ ಹೇಳಿದ್ದಾನಂತೆ
ನೀ ಸಿಗುತಲೆ ಹಿಂದೆ
ತರಬೇಕು ಎಂದು.
ಏನೆಂದುಕೊಂಡಿವೆ ಅವು
ನಿನಗಾರು ಇಲ್ಲವೆಂದೆ
ಹಿಂದು ಮುಂದು?
ನಾ ಜೊತೆ ಇರುವವರೆಗೂ
ನಿನಗೇನು ಮಾಡದು
ತಾರೆಗಳ ದಂಡು.
ಬಾ ಬಚ್ಚಿಡುವೆ ಎದೆಯಲ್ಲಿ
ನಿನ್ನ ಕೊಂಡೊಯ್ಯಲಿ
ನನ್ನನ್ನು ಕೊಂದು..!
-ತ್ರಿವಿಕ್ರಮ
No comments:
Post a Comment